Tuesday, June 7, 2016

ಅಮೃತವಾಣಿ - ೧೩

ಪುರಾ ಸರಸಿ ಮಾನಸೇ ವಿಕಚಸಾರಸಾಳಿಸ್ಖಲತ್ ಪರಾಗಸುರಭೀಕೃತೇ ಪಯಸಿ ಯಸ್ಯ ಯಾತಂ ವಯಃ |
ಸ ಪಲ್ವಲ ಜಲೇಧುನಾ ಮಿಲದನೇಕಭೇಕಾಕುಲೇ ಮರಾಳಕುಲನಾಯಕಃ ಕಥಯ ರೇ ಕಥಂ ವರ್ತತಾಮ್ ||
 
ಜ್ವಲಿಸುವ ಬೆಂಕಿಗೆ ಸೂರ‍್ಯನ ಆಶ್ರಯ ದೊರೆತಾಗ ಅದು ಮತ್ತಷ್ಟು ಪ್ರಜ್ವಲಿಸುತ್ತದೆ. ಹಾಗೆಯೇ ರಾತ್ರಿಯ ಆಶ್ರಯ ಹಿಂದೆ ಹಂಸವು ಮಾನಸಸರೋವರದಲ್ಲಿ ಅನೇಕ ಕಮಲಪುಷ್ಪಗಳಿಂದ ದ್ರವಿಸುವ ಮಕರಂದದಿಂದ ಕೂಡಿದ ಸುಗಂಧಮಯ ನೀರಿನಲ್ಲಿ ತನ್ನ ಆಯುಷ್ಯದ ಎಷ್ಟೋ ದಿನಗಳನ್ನು ಆನಂದದಿಂದ ಕಳೆಯಿತು. ಅದೇ ಹಂಸವು ಈಗ ವಟಗುಟ್ಟುವ ಕಪ್ಪೆಗಳಿಂದ ತುಂಬಿದ, ಮಲಿನ ಜಲಾಶಯದಲ್ಲಿ ಇರಲು ಹೇಗೆ ಸಾಧ್ಯ? ಅದರಂತೆ ಕಾವ್ಯ-ಸಾಹಿತ್ಯರಸಿಕರ ಮಧ್ಯೆ ಕಾಲ ಕಳೆಯುವ ವಿದ್ವಾಂಸನು ಮೂರ್ಖರ ನಡುವೆ ವಾಸಿಸುವುದಾದರೂ ಹೇಗೆ?
 
| ಭಾಮಿನೀವಿಲಾಸ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
| ಮೂಲ ಸಂಗ್ರಹ: ವಿಜಯವಾಣಿ 

No comments:

Post a Comment