Saturday, January 24, 2015

ಅಮೃತವಾಣಿ - ೭

ಪ್ರದಾನಂ ಪ್ರಚ್ಛನ್ನಂ ಗೃಹಮುಪಗತೇ ಸಂಭ್ರಮವಿಧಿಃ ಪ್ರಿಯಂ ಕೃತ್ವಾ ಮೌನಂ ಸದಸಿ ಕಥನಂ ಚಾಪ್ಯುಪಕೃತೇಃ |
ಅನುತ್ಸೇಕೋ ®PÁëöäöå ನಿರಭಿಭವಸಾರಾಃ ಪರಕಥಾಃ ಸತಾಂ ಕೇನೋದ್ದಿಷ್ವಂ ವಿ‌ಷಮಸಿಧಾರಾವ್ರತಮಿದಮ್ ||

ರಹಸ್ಯವಾಗಿ ದಾನ ಮಾಡುವುದು, ಮನೆಗೆ ಬಂದ ಅತಿಥಿ-ಅಭ್ಯಾಗತರನ್ನು ಸಂತೋಷದಿಂದ ಸತ್ಕರಿಸುವುದು, ಮಾಡಿದ ಸತ್ಕಾರ್ಯಗಳ ಬಗ್ಗೆ ಹೇಳಿಕೊಳ್ಳದಿರುವುದು, ಇತರರು ಮಾಡಿದ ಉಪಕಾರವನ್ನು ಸಾರ್ವಜನಿಕವಾಗಿ ಹೇಳುವುದು, ಐಶ್ವರ್ಯ ಬಂದಾಗ ಅದನ್ನು ಗತ್ತಿನಿಂದ ಪ್ರದರ್ಶಿಸದಿರುವುದು, ಮತ್ತೊಬ್ಬರ ಬಗ್ಗೆ ಮಾತನಾಡುವಾಗ ನಿಂದನೆಯ ಶಬ್ದಗಳು ಬರದಂತೆ ಜಾಗೃತೆ ವಹಿಸುವುದು - ಹೀಗೆ ಅಲಗಿನ ಮೇಲಿನ ನಡೆಯಂತಿರುವ ಕಠೋರ ವೃತವನ್ನು ಸಜ್ಜನರಿಗೆ ಯಾರು ವಿಧಿಸಿರಬಹುದು?

| ನೀತಿ ಶತಕ / ಸಂಗ್ರಹ, ವ್ಯಾಖ್ಯಾನ: ಪಂಡೀತ ಸಮೀರಾಚಾರ್ಯ ಕಂಠಪಲ್ಲೀ
|ಮೂಲ ಸಂಗ್ರಹ: ವಿಜಯವಾಣಿ/ ಅಮೃತವಾಣಿ

Saturday, January 3, 2015

ಅಮೃತವಾಣಿ - ೬

ರಥಂ ಶರೀರಂ ಪುರುಷಸ್ಯ ರಾಜನ್ ಆತ್ಮಾ ನಿಯತೇಂದ್ರಿಯಾಣ್ಯಸ್ಯ ಚಾಶ್ವಾಃ |
ತೈರಪ್ರಮತ್ತಃ ಕುಶಲೀ ಸದಶ್ವೈರ್ದಾಂತೈಃ ಸುಖಂ ಯಾತಿ ರಥೀವ ಧೀರಃ ||

ಮಾನವನ ಶರೀರವೇ ರಥ. ಮನಸ್ಸು ಈ ರಥದ ಸಾರಥಿ. ಜ್ಞಾನೇಂದ್ರಿಯ-ಕರ್ಮೇಂದ್ರಿಯಗಳು ರಥದ ಕುದುರೆಗಳು. ಇವುಗಳನ್ನು ವಶದಲ್ಲಿಟ್ಟುಕೊಂಡು ಜಾಗರೂಕತೆಯಿಂದ ಇರುವ ಜಾಣನು (ಜೀವಾತ್ಮನು) ನಿಯಂತ್ರಿತವಾದ ಕುದುರೆಗಳಿಂದ ಶೋಭಿಸುವ ರಥದಲ್ಲಿ ಕುಳಿತು ಸುಖವಾಗಿ ಪಯಣಿಸುವ ಧೀರ ರಥಿಕನಂತೆ, ಸುಗಮವಾಗಿ ಬಾಳಿನಲ್ಲಿ ಪಯಣಿಸುತ್ತಾನೆ.

ಉದ್ಯೋಗಪರ್ವ (ಮಹಾಭಾರತ) / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ / ಅಮೃತವಾಣಿ