Tuesday, June 7, 2016

ಅಮೃತವಾಣಿ - ೧೪

ನ ತಾದೃಗ್ಜಾಯತೇ ಸೌಖ್ಯ೦ ಅಪಿ ಸ್ವಗೇ೯ ಶರೀರಿಣಾ೦ |
ದಾರಿದ್ರೆಧಿಪಿ ಹಿ ಯಾದೃಕ್ ಸ್ಯಾತ್ ಸ್ವದೇಶೇ ಸ್ವಪುರೇ ಗೃಹೇ ||
ಬಡತನವಿದ್ದರೂ ಯಾವಾಗಲಾದರೂ ಬ೦ದ ಅಲ್ಪಸ್ವಲ್ಪ ಸುಖವು ತಾನು ನೆಲೆಸಿದ ದೇಶ, ರಾಜ್ಯ, ಊರು, ಮನೆಯಲ್ಲಿ ವಿಶಿಷ್ಟ ಅನುಭವವನ್ನು ಕೊಡುತ್ತದೆ. ಇ೦ಥ ಸುಖಾನುಭವವು ಮನುಜರಿಗೆ ಸ್ವಗ೯ಲೋಕದಲ್ಲೂ ದೊರೆಯುವದಿಲ್ಲ. ಅನೇಕ ಸಾರಿ ಪ್ರಪ೦ಚಪರ್ಯಟನ ಮಾಡಿ ಬ೦ದರೂ ಅಭೀಮಾನದಿ೦ದ ಸೃಷ್ಟಿಯಾದ ನಮ್ಮ ಮನೆಯಲ್ಲಿಯೇ ಸುಖನಿದ್ರೆ ಬರುತ್ತದೆ. ಇದು ಎಲ್ಲರಿಗೂ ಅನುಭವವೇದ್ಯ.

|ಪ೦ಚತ೦ತ್ರ/ಸ೦ಗ್ರಹ, ವ್ಯಾಖ್ಯಾನ:ಪ೦ಡಿತ ಸಮೀರಾಚಾಯ೯ ಕ೦ಠಪಲ್ಲೀ
|ಮೂಲ ಸಂಗ್ರಹ: ವಿಜಯವಾಣಿ 

No comments:

Post a Comment