ಅಮೃತವಾಣಿ - 17
ಪರಸ್ಪರಸ್ಯ ಮರ್ಮಾಣಿ ಯೇ ಭಾಷಂತೇ ನರಾಧಮಾಃ |
ತೇ ಏವ ವಿಲಯಂ ಯಾಂತಿ ವಲ್ಮೀಕೋದರ ಸರ್ಪವತ್ ||
ಸ್ವಹಿತಾಸಕ್ತಿಯ ರಕ್ಷಣೆಗಾಗಿ ಪರರ ರಹಸ್ಯಗಳನ್ನು ಬಯಲುಮಾಡಿ ನಿಂದನೀಯ ಮಾತುಗಳನ್ನಾಡುವವರು ಹುತ್ತದಲ್ಲಿ ಸಿಕ್ಕ ಹಾವಿನಂತೆ ನಿಶ್ಚಿತವಾಗಿ ವಿನಾಶ ಹೊಂದುತ್ತಾರೆ. ಅನ್ಯರ ರಹಸ್ಯಗಳನ್ನು ಬಯಲುಮಾಡುವ ಮೊದಲು ತನ್ನ ಚಾರಿತ್ರ್ಯದ ಬಗ್ಗೆ ಯೋಚಿಸಬೇಕು. ಹಾಗೂ ಮುಂದೆ ಆಗುವ ಸ್ಥಿತಿಗಳನ್ನು ಪೂರ್ವಾಪರವಾಗಿ ವಿಚಾರಿಸಿ ಮುಂದಿನ ಹೆಜ್ಜೆಯನ್ನಿಡಬೇಕು. ಯಾವುದೇ ಕಾರಣಕ್ಕೂ ಅವಸರಪಡಬಾರದು.
ಕೃಪೆ/ಮೂಲ ಸಂಗ್ರಹ:
| ಚಾಣಕ್ಯನೀತಿದರ್ಪಣ /ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ
ಕಂಠಪಲ್ಲೀ