Sunday, October 1, 2017

ರಾವಣ...!!!

ರಾವಣನಾಗುವುದು ಸುಲಭವಲ್ಲ.
ರಾವಣನಲ್ಲಿ ಅಹಂಕಾರದೊಂದಿಗೆ ಪಶ್ಚಾತ್ತಾಪವೂ ಇತ್ತು.
ರಾವಣನಲ್ಲಿ ವ್ಯಸನದೊಂದಿಗೆ ಸಂಯಮವೂ ಇತ್ತು.
ರಾವಣನಲ್ಲಿ ಸೀತೆಯನ್ನು ಅಪಹರಿಸುವಂತಹ ಛಲ ತಾಕತ್ತಿತ್ತು. ಸಮ್ಮತಿಯಿಲ್ಲದೆ ಪರಸ್ರೀಯನ್ನು ಮುಟ್ಟಲಾರೆ ಎಂಬ ಸಂಕಲ್ಪ ಇತ್ತು .  ಸೀತೆಯನ್ನು ಲಂಕೆಯಿಂದ ಜೀವಂತ ಕರೆತಂದದ್ದು ಅದು ರಾಮ  ಆದರೆ ಸೀತೆ ಪವಿತ್ರವಾಗಿ ಉಳಿದ್ದದ್ದು ಅದು ರಾವಣನಿಂದ.
ರಾಮಾ ನಿನ್ನ ಯುಗದಲ್ಲಿ ರಾವಣನೂ ಒಳ್ಳೆಯವನಿದ್ದ. ಹತ್ತಕ್ಕೆ ಹತ್ತೂ ತಲೆಗಳು ಹೊರಗಿನವರಿಗೆ ಕಾಣಿಸುತ್ತಿತ್ತು, ಒಳಗೊ಼ಂದು ಹೊರಗೊಂದು ಇರಲ್ಲಿಲ್ಲ ಆದರೆ ಈಗ ರಾಮನ ಮುಖವಾಡ ತೊಟ್ಟವರ ದರ್ಬಾರಿನಲ್ಲಿ ರಾವಣನನ್ನು ಹುಡುಕುವುದು ಕಷ್ಟ. 
ಪ್ರತಿಸಲ ವಿಜಯದಶಮಿಯಂದು ದಹಿಸಿಕೊಳ್ಳುವ ರಾವಣ ನೆರೆದಿರುವ ಜನಸಂದಣಿಯಲ್ಲಿ ಪ್ರತಿಯೋರ್ವರಲ್ಲಿ ಕೇಳುತ್ತಾನೆ ನಿಮ್ಮಲ್ಲಿ ರಾಮನ್ಯಾರು ನಿಮ್ಮಲ್ಲಿ ರಾಮನ್ಯಾರು?....

~ ಅನಾಮಿಕ