Saturday, April 2, 2016

ಅಮೃತವಾಣಿ - ೧೨



ತ್ಯಕ್ತವ್ಯೋ ಮಮಕಾರಃ ತ್ಯಕ್ತುಂ ಯದಿ ಶಕ್ಯತೇ ನಾಸೌ |
ಕರ್ತವ್ಯೋ ಮಮಕಾರಃ ಕಿಂ ತು ಸರ್ವತ್ರ ಕರ್ತವ್ಯಃ ||

ನಾನು-ನನ್ನದು ಎಂಬ ಭಾವನೆಗಳನ್ನು ಬಿಡುವುದು ಸರ್ವೋತ್ತಮವಾದ ಕಾರ್ಯ. ಆದರೆ ಅದನ್ನು ಬಿಡಲು ಸಾಧ್ಯವಾಗದಿದ್ದರೆ ಮಮಕಾರವನ್ನು ಆಚರಿಸೋಣ.ಅಂದರೆ ಎಲ್ಲರ ಬಗ್ಗೆಯೂ ಇವರು ನನ್ನವರು ಎಂದು ಭಾವಿಸೋಣ. ಅವರಿಗೆ ಬಂದ ಕಷ್ಟಗಳನ್ನು ತನ್ನ ಕಷ್ಟಗಳೇ ಎಂದು ತಿಳಿದು ಪರಿಹರಿಸಲು,ಸಾಂತ್ವನ ಹೇಳಲು ಪ್ರಯತ್ನಿಸೋಣ. ಅವರ ಆಧ್ಯಾತ್ಮ ಸಂತೋಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಮ್ಮ ಕಾರ್ಯಕ್ರಮ ಎಂದು ಹೆಮ್ಮೆಯಿಂದ ಅಧಿಕವಾದ ಸಂತೋಷವನ್ನು ಅನುಭವಿಸೋಣ

| ವೈರಾಗ್ಯಶತಕ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ.
| ಮೂಲ ಸಂಗ್ರಹ: ವಿಜಯವಾಣಿ .

No comments:

Post a Comment