~ ಅಧ್ಯಾತ್ಮ ~
ಆತ್ಮಾನಂ ಅನಭಿಜ್ಞಾಯ ವಿವೇಕ್ತುಂ ಯೋsನ್ಯದಿಚ್ಛತಿ |
ತೇನ ಭೌತೇನ ಕೀಂ ವಾಚ್ಯಂ ಪ್ರಶ್ನೇsಸ್ಮಿನ್ ಕೋ ಭವಾನಿತಿ ||
ತಾನು ಯಾರು? ಎಲ್ಲಿಂದ ಬಂದಿದ್ದೇನೆ? ಯಾಕೆ ಬಂದಿದ್ದೇನೆ? ಎಂದು ತಿಳಿಯುವ ಗೋಜಿಗೆ ಹೋಗದೆ ಕೇವಲ ಪರವಸ್ತುವಿನ ಬಗ್ಗೆ, ಪರರ ಬಗ್ಗೆ, ಪರವೂರಿನ ಬಗ್ಗೆ ತಿಳಿಯಲು ಹಾತೊರೆಯುವ ವ್ಯಕ್ತಿಗೆ, ನೀನು ಯಾರು? ಎಂದು ಪ್ರಶ್ನಿಸಿದರೆ ಅವನು ತನ್ನ ಬಗ್ಗೆ ತಿಳಿಯದಿದ್ದರೆ ಬದುಕಿಯೂ ಏನು ಪ್ರಯೋಜನ? ಬದುಕಿರುವಾಗ ಆತ್ಮಸ್ವರೂಪವನ್ನು ತಿಳಿಯುವುದು ಅತ್ಯಂತ ಮುಖ್ಯ. ಹಿರಿಯರು ಇದನ್ನೇ ಅಧ್ಯಾತ್ಮ ಎಂದು ಕರೆಯುತ್ತಾರೆ.
~ ಅಭಿನವಗುಪ್ತ /ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
| ಮೂಲ ಸಂಗ್ರಹ: ವಿಜಯವಾಣಿ