Monday, December 2, 2013

ಅಮೃತವಾಣಿ - ೩

ಅಧನಂ ದುರ್ಬಲಂ ಪ್ರಾಹುಃ ಧನೇನ ಬಲವಾನ್ ಭವೇತ್ ಸರ್ವಂ ಧನವತಾ ಪ್ರಾಪ್ಯಂ ಸರ್ವಂ ತರತಿ ಕೋಶವಾನ್ |
ಕೋಶೇನ ಧರ್ಮಃ ಕಾಮಶ್ಚ ಪರಲೋಕಸ್ತಥಾ ಹ್ಯಯಮ್ ತಂ ಚ ಧರ್ಮೇಣ ಲಿಪ್ಸೇತ ನಾಧರ್ಮೇಣ ಕದಾಚನ ||
ಬಲಾಬಲಗಳ ತೀರ್ಮಾನವಾಗುವುದೇ ಧನದಿಂದ, ಈ ಲೋಕದಲ್ಲಿ ಧನವಿಲ್ಲದವನನ್ನು ದುರ್ಬಲನೆಂದು ಕರೆಯುತ್ತಾರೆ. ಧನವಿದ್ದವನು ಬಲಶಾಲಿಯೆನಿಸುತ್ತಾನೆ. ಸನ್ಮಾನ, ಗೌರವ, ಪ್ರಶಸ್ತಿ, ಮುಂತಾದವುಗಳು ಹಣವಂತನಿಗೇ ಲಭಿಸುತ್ತವೆ. ಧನಸಮೃದ್ಧಿಯುಳ್ಳವನು ಎಲ್ಲ ಕಷ್ಟಗಳಿಂದಲೂ ಮುಕ್ತನಾಗುತ್ತಾನೆ. ಅರ್ಥಸಂಪಾದನೆಯಿಂದ ಧರ್ಮ ಹಾಗೂ ಕಾಮಗಳು, ಇಹಲೋಕ ಮತ್ತು ಪರಲೋಕಗಳು ಪ್ರಾಪ್ತವಾಗುತ್ತವೆ.
ಈ ವಿ‌ಷಯದಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ ಧನವನ್ನು ಧರ್ಮ, ನ್ಯಾಯಗಳಿಂದಲೇ ಗಳಿಸಬೇಕು. ಯಾವಕಾರಣದಿಂದಲೂ ಅಧರ್ಮ, ಅನ್ಯಾಯಗಳಿಂದ ಧನ ಸಂಪಾದಿಸಬಾರದು.
ಅಧರ್ಮದ ಧನ ಫಲಿಸುವುದೂ ಇಲ್ಲ.
  
 ~ ಶಾಂತಿಪರ್ವ ~ ಮಹಾಭಾರತ/ ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ


ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ

No comments:

Post a Comment