ಅಮೃತಸ್ಯೇವ ಸಂತೃಪ್ಯೇದವಮಾನಸ್ಯ ತತ್ವವಿತ್ |
ವಿಷಸ್ಯೇವೋದ್ವಿಜೇನ್ನಿತ್ಯಂ ಸಮ್ಮಾನಸ್ಯ ವಿಚಕ್ಷಣಃ ||
ತತ್ವಜ್ನಾನಿಯಾದ ಸಾಧಕ ಪುರುಷನು ಯಾರಾದರೂ ತನ್ನನ್ನು ನಿಂದನೆ ಮಾಡಿದರೆ,
ಅವಮಾನ ಮಾಡಿದರೆ ಅದನ್ನು ಅಮೃತವೆಂದೇ ಭಾವಿಸಿ ಸಂತೃಪ್ತನಾಗಿ ಜೀವಿಸಬೇಕು.
ಒಂದು ವೇಳೆ ಯಾರಾದರೂ ತನ್ನ ಬಗ್ಗೆ ಪ್ರಶಂಸೆ ಮಾಡಿದರೆ, ಸನ್ಮಾನವನ್ನು ಮಾಡಿದರೆ ಅದನ್ನು ವಿಷವೆಂದು ತಿಳಿದು ಉದ್ವಿಗ್ನ ಮನಸ್ಕನಾಗಿ ಮೌನಿಯಾಗಿದ್ದು ಬಿಡಬೇಕು.
ಹೀಗೆ ಹೊಗಳಿಕೆಗೆ ಹಿಗ್ಗದೇ ತೆಗಳಿಕೆಗೆ ಕುಗ್ಗದೇ ಸಮಚಿತ್ತದಿಂದ ಇರುವುದೇ ಮಹತ್ತರವಾದ ಸಾಧನೆ ಎನಿಸಿದೆ.
ಜೈಗೀಷವ್ಯ ವಚನ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ
No comments:
Post a Comment