Friday, November 8, 2013

ಅಮೃತವಾಣಿ - ೨

ಯಂ ಮಾತಾಪಿತರೌ ಕ್ಲೇಶಂ ಸಹೇತೇ ಸಂಭವೇ ನೃಣಾಂ |
ನ ತಸ್ಯ ನಿಷ್ಕೃತಿಃ ಶಕ್ಯಾ ಕರ್ತುಂ ವರ್ಷಶತೈರಪಿ || 
ಮಕ್ಕಳು ಹುಟ್ಟುವಾಗ ತಂದೆ-ತಾಯಿಗಳು ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಹುಟ್ಟದಿದ್ದರೆ ಅದಕ್ಕಾಗಿ ಕೊರಗುತ್ತಾರೆ.
ಹುಟ್ಟಿದ ಮೇಲೆ ಅವರನ್ನು ದೊಡ್ಡ ವ್ಯಕ್ತಿಗಳಾಗಿ ಹೇಗೆ ಬೆಳೆಸುವುದು ಎಂದು ಆಲೋಚಿಸುತ್ತಾರೆ. 
ಅದಕ್ಕಾಗಿ ತಮ್ಮ ಪ್ರಾಣ-ಧನಗಳನ್ನು ಪರಿಗಣಿಸದೇ ಜೀವನದುದ್ದಕ್ಕೂ ಹೋರಾಡುತ್ತಾರೆ. ಮಕ್ಕಳ ಅಭ್ಯುದಯಕ್ಕಾಗಿ ಕಂಡ ಕಂಡ ದೈವಗಳಿಗೆ ಹರಕೆ ಹೊರತ್ತಾರೆ. ಅಭೀಷ್ಟ ಸಿದ್ಧಿಯಾದರೆ ಅವರಷ್ಟು ಸಂಭ್ರಮ ಪಡುವವರೇ ಇಲ್ಲ.
ಇಂಥ ತಂದೆ ತಾಯಿಗಳ ಋಣವನ್ನು ತೀರಿಸಲು ಮಕ್ಕಳಾದವರು ನೂರು ವರ್ಷ ಸೇವೆ ಮಾಡಿದರೂ ಸಾಧ್ಯವಿಲ್ಲ. 

~ ಮನುಸ್ಮೃತಿ/ ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ 

ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ 

No comments:

Post a Comment