Friday, November 1, 2013

ಅಮೃತವಾಣಿ - ೧

ಲೋಕದ್ವಯಪ್ರತಿಭಯೈಕನಿದಾನಮೇತದ್ಧಿಕ್ ಪ್ರಾಣಿನಾಂ ಋಣಮಹೋ ಪರಿಣಾಮಘೋರಮ್ |
ಏಕಃ ಸ ಏವ ಹಿ ಪುಮಾನ್ ಪರಮಸ್ತ್ರಿಲೋಕೇ ಕ್ರುದ್ಧಸ್ಯ ಯೇನ ಧನಿಕಸ್ಯ ಮುಖಂ ನ ದೃಷ್ಟಮ್ ||
ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಮನುಷ್ಯರಿಗೆ ಘನಘೋರವಾದ ದುಃಖಾಂತ್ಯದ ದರ್ಶನವನ್ನು ಮಾಡಿಸುವ ಭಯದ ಮೂಲವೇ ಸಾಲ.
ಎಲ್ಲ ಬಾಧೆಗಳಿಗಿಂತಲೂ ಸಾಲಬಾಧೆ ಭಯಂಕರವಾದದ್ದು. ಕೋಪ ಮಾಡಿಕೊಂಡು ಜನರ ಮಧ್ಯದಲ್ಲಿಯೇ ಅವಮಾನ ಮಾಡುವ, ಸಾಲ ಕೊಟ್ಟ ಶ್ರೀಮಂತನ ಕೆಂಗಣ್ಣಿಗೆ ಯಾವನು ಗುರಿಯಾಗುವುದಿಲ್ಲವೋ ಆ ಮನುಷ್ಯನು ಮೂರು ಲೋಕಗಳಲ್ಲಿಯೇ ಧನ್ಯ ಎಂದು ತಿಳಿಯಬೇಕು.
ಇದಕ್ಕೆ ಪೂರಕವಾಗಿ ಸಾಲವನ್ನು ತರುವಾಗ ಹಾಲು-ಹಣ್ಣುಂಬಂತೆ, ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಎಂದು ಸರ್ವಜ್ಞ ತನ್ನ ವಚನದಲ್ಲಿ ಮಾರ್ಮಿಕವಾಗಿ ನುಡಿದಿದ್ದಾನೆ. 
 ~ ಚಂಡಕೌಶಿಕ ನಾಟಕ / ಸಂಗ್ರಹ, ವ್ಯಾಖ್ಯಾನ : ಪಂಡಿತ ಸಮೀರಾಚಾರ್ಯ ಕಂಠಪಲ್ಲೀ

ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ

No comments:

Post a Comment