Saturday, January 3, 2015

ಅಮೃತವಾಣಿ - ೬

ರಥಂ ಶರೀರಂ ಪುರುಷಸ್ಯ ರಾಜನ್ ಆತ್ಮಾ ನಿಯತೇಂದ್ರಿಯಾಣ್ಯಸ್ಯ ಚಾಶ್ವಾಃ |
ತೈರಪ್ರಮತ್ತಃ ಕುಶಲೀ ಸದಶ್ವೈರ್ದಾಂತೈಃ ಸುಖಂ ಯಾತಿ ರಥೀವ ಧೀರಃ ||

ಮಾನವನ ಶರೀರವೇ ರಥ. ಮನಸ್ಸು ಈ ರಥದ ಸಾರಥಿ. ಜ್ಞಾನೇಂದ್ರಿಯ-ಕರ್ಮೇಂದ್ರಿಯಗಳು ರಥದ ಕುದುರೆಗಳು. ಇವುಗಳನ್ನು ವಶದಲ್ಲಿಟ್ಟುಕೊಂಡು ಜಾಗರೂಕತೆಯಿಂದ ಇರುವ ಜಾಣನು (ಜೀವಾತ್ಮನು) ನಿಯಂತ್ರಿತವಾದ ಕುದುರೆಗಳಿಂದ ಶೋಭಿಸುವ ರಥದಲ್ಲಿ ಕುಳಿತು ಸುಖವಾಗಿ ಪಯಣಿಸುವ ಧೀರ ರಥಿಕನಂತೆ, ಸುಗಮವಾಗಿ ಬಾಳಿನಲ್ಲಿ ಪಯಣಿಸುತ್ತಾನೆ.

ಉದ್ಯೋಗಪರ್ವ (ಮಹಾಭಾರತ) / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ / ಅಮೃತವಾಣಿ



No comments:

Post a Comment