Saturday, November 29, 2014

ಅಮೃತವಾಣಿ - ೫



ಅರ್ಥಾ ವೈವಾಚಿ ನಿಯತಾಃ ವಾಙ್ಮೂಲಾ: ವಾಚಿ ಮಿಶ್ರಿತಾಃ |
ಯೋ ವೈತಾಂ ಸ್ತೇಯಯೇದ್ವಾಚಂ ಸ ಸರ್ವಸ್ತೇಯಕೃನ್ನರಃ ||

ಅರ್ಥವು ಮಾತಿನಲ್ಲಿ ಅಡಗಿದೆ, ಅರ್ಥಕ್ಕೆ ಮಾತೇ ಮೂಲ, ಅರ್ಥ ಹಾಗೂ ಮಾತುಗಳು ಪರಸ್ಪರ ಬೆರೆತಿವೆ. ಯಾರು ಮಾತನ್ನು ಸುಳ್ಳಾದ, ವಿಪರೀತವಾದ ಅರ್ಥವನ್ನು ಕೊಡುವಂತೆ ಮಾತನಾಡುತ್ತಾರೆಯೋ, ಅವರು ಎಲ್ಲ ರೀತಿಯಲ್ಲೂ ಕಳ್ಳತನವನ್ನು ಮಾಡಿದ ದೋ‍ಷಕ್ಕೆ ಭಾಗಿಯಾಗುತ್ತಾರೆ. ಇಂಥವರು ಜಗತ್ತಿನಲ್ಲಿ ಅನರ್ಥವನ್ನು ಉಂಟು ಮಾಡುವ ಅಪಾಯವನ್ನು ತಂದೊಡ್ಡುತ್ತಾರೆ. ಆದ್ದರಿಂದ ಯಾವಾಗಲೂ ಹಿತಕರವಾಗಿರುವ, ನೈಜ ಅರ್ಥಗಳನ್ನು ಒಳಗೊಂಡ ಮಾತನ್ನೇ ಆಡುತ್ತಿರಬೇಕು.


ನಾರದ ಸ್ಮೃತಿ / ಸಂಗ್ರಹ, ವ್ಯಾಖ್ಯಾನ: ಪಂಡೀತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ/ ಅಮೃತವಾಣಿ



No comments:

Post a Comment