Friday, April 12, 2019

ಅಮೃತವಾಣಿ - ೧೫


ವಿನಾ ಕಾರ್ಯೇಣ ಯೇ ಮೂಢಾ ಗಚ್ಛಂತಿ ಪರಮಂದಿರಂ|
ಅವಶ್ಯಂ ಲಘುತಾಂ ಯಾಂತಿ ಕೃಷ್ಣಪಕ್ಷೇ ಯಥಾ ಶಶೀ||

ಸುಜ್ಞಾನಿಗಳು, ಗುರುಗಳು ಇವರನ್ನು ಹೊರತುಪಡಿಸಿ ವಿನಾಕಾರಣ ಇತರರ (ಅದರಲ್ಲಿಯೂ ವಿಶೇಷವಾಗಿ ಅಹಂಕಾರಯುಕ್ತರಾದ ಧನವಂತರ) ನಿವಾಸಗಳಿಗೆ ವೃಥಾ ಹೋಗಬಾರದು. ಆಮಂತ್ರಣ ಇದ್ದರೆ, ಅಲ್ಲಿ ಪ್ರೀತಿ ವಿಶ್ವಾಸಗಳು ಇದ್ದರೆ ಮಾತ್ರ ಹೋಗಬೇಕು. ಕರೆಯದೆ ಇದ್ದರೂ ಅಲ್ಲಿಗೆ ಹೋದರೆ ಅಂಥವರು ಮೂರ್ಖರೇ ಸರಿ.

|| ಸುವಚನರತ್ನಾವಲಿ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ

No comments:

Post a Comment