Friday, April 12, 2019

ಅಮೃತವಾಣಿ - ೧೫


ವಿನಾ ಕಾರ್ಯೇಣ ಯೇ ಮೂಢಾ ಗಚ್ಛಂತಿ ಪರಮಂದಿರಂ|
ಅವಶ್ಯಂ ಲಘುತಾಂ ಯಾಂತಿ ಕೃಷ್ಣಪಕ್ಷೇ ಯಥಾ ಶಶೀ||

ಸುಜ್ಞಾನಿಗಳು, ಗುರುಗಳು ಇವರನ್ನು ಹೊರತುಪಡಿಸಿ ವಿನಾಕಾರಣ ಇತರರ (ಅದರಲ್ಲಿಯೂ ವಿಶೇಷವಾಗಿ ಅಹಂಕಾರಯುಕ್ತರಾದ ಧನವಂತರ) ನಿವಾಸಗಳಿಗೆ ವೃಥಾ ಹೋಗಬಾರದು. ಆಮಂತ್ರಣ ಇದ್ದರೆ, ಅಲ್ಲಿ ಪ್ರೀತಿ ವಿಶ್ವಾಸಗಳು ಇದ್ದರೆ ಮಾತ್ರ ಹೋಗಬೇಕು. ಕರೆಯದೆ ಇದ್ದರೂ ಅಲ್ಲಿಗೆ ಹೋದರೆ ಅಂಥವರು ಮೂರ್ಖರೇ ಸರಿ.

|| ಸುವಚನರತ್ನಾವಲಿ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ

Sunday, October 1, 2017

ರಾವಣ...!!!

ರಾವಣನಾಗುವುದು ಸುಲಭವಲ್ಲ.
ರಾವಣನಲ್ಲಿ ಅಹಂಕಾರದೊಂದಿಗೆ ಪಶ್ಚಾತ್ತಾಪವೂ ಇತ್ತು.
ರಾವಣನಲ್ಲಿ ವ್ಯಸನದೊಂದಿಗೆ ಸಂಯಮವೂ ಇತ್ತು.
ರಾವಣನಲ್ಲಿ ಸೀತೆಯನ್ನು ಅಪಹರಿಸುವಂತಹ ಛಲ ತಾಕತ್ತಿತ್ತು. ಸಮ್ಮತಿಯಿಲ್ಲದೆ ಪರಸ್ರೀಯನ್ನು ಮುಟ್ಟಲಾರೆ ಎಂಬ ಸಂಕಲ್ಪ ಇತ್ತು .  ಸೀತೆಯನ್ನು ಲಂಕೆಯಿಂದ ಜೀವಂತ ಕರೆತಂದದ್ದು ಅದು ರಾಮ  ಆದರೆ ಸೀತೆ ಪವಿತ್ರವಾಗಿ ಉಳಿದ್ದದ್ದು ಅದು ರಾವಣನಿಂದ.
ರಾಮಾ ನಿನ್ನ ಯುಗದಲ್ಲಿ ರಾವಣನೂ ಒಳ್ಳೆಯವನಿದ್ದ. ಹತ್ತಕ್ಕೆ ಹತ್ತೂ ತಲೆಗಳು ಹೊರಗಿನವರಿಗೆ ಕಾಣಿಸುತ್ತಿತ್ತು, ಒಳಗೊ಼ಂದು ಹೊರಗೊಂದು ಇರಲ್ಲಿಲ್ಲ ಆದರೆ ಈಗ ರಾಮನ ಮುಖವಾಡ ತೊಟ್ಟವರ ದರ್ಬಾರಿನಲ್ಲಿ ರಾವಣನನ್ನು ಹುಡುಕುವುದು ಕಷ್ಟ. 
ಪ್ರತಿಸಲ ವಿಜಯದಶಮಿಯಂದು ದಹಿಸಿಕೊಳ್ಳುವ ರಾವಣ ನೆರೆದಿರುವ ಜನಸಂದಣಿಯಲ್ಲಿ ಪ್ರತಿಯೋರ್ವರಲ್ಲಿ ಕೇಳುತ್ತಾನೆ ನಿಮ್ಮಲ್ಲಿ ರಾಮನ್ಯಾರು ನಿಮ್ಮಲ್ಲಿ ರಾಮನ್ಯಾರು?....

~ ಅನಾಮಿಕ 

Tuesday, June 7, 2016

ಅಮೃತವಾಣಿ - ೧೪

ನ ತಾದೃಗ್ಜಾಯತೇ ಸೌಖ್ಯ೦ ಅಪಿ ಸ್ವಗೇ೯ ಶರೀರಿಣಾ೦ |
ದಾರಿದ್ರೆಧಿಪಿ ಹಿ ಯಾದೃಕ್ ಸ್ಯಾತ್ ಸ್ವದೇಶೇ ಸ್ವಪುರೇ ಗೃಹೇ ||
ಬಡತನವಿದ್ದರೂ ಯಾವಾಗಲಾದರೂ ಬ೦ದ ಅಲ್ಪಸ್ವಲ್ಪ ಸುಖವು ತಾನು ನೆಲೆಸಿದ ದೇಶ, ರಾಜ್ಯ, ಊರು, ಮನೆಯಲ್ಲಿ ವಿಶಿಷ್ಟ ಅನುಭವವನ್ನು ಕೊಡುತ್ತದೆ. ಇ೦ಥ ಸುಖಾನುಭವವು ಮನುಜರಿಗೆ ಸ್ವಗ೯ಲೋಕದಲ್ಲೂ ದೊರೆಯುವದಿಲ್ಲ. ಅನೇಕ ಸಾರಿ ಪ್ರಪ೦ಚಪರ್ಯಟನ ಮಾಡಿ ಬ೦ದರೂ ಅಭೀಮಾನದಿ೦ದ ಸೃಷ್ಟಿಯಾದ ನಮ್ಮ ಮನೆಯಲ್ಲಿಯೇ ಸುಖನಿದ್ರೆ ಬರುತ್ತದೆ. ಇದು ಎಲ್ಲರಿಗೂ ಅನುಭವವೇದ್ಯ.

|ಪ೦ಚತ೦ತ್ರ/ಸ೦ಗ್ರಹ, ವ್ಯಾಖ್ಯಾನ:ಪ೦ಡಿತ ಸಮೀರಾಚಾಯ೯ ಕ೦ಠಪಲ್ಲೀ
|ಮೂಲ ಸಂಗ್ರಹ: ವಿಜಯವಾಣಿ 

ಅಮೃತವಾಣಿ - ೧೩

ಪುರಾ ಸರಸಿ ಮಾನಸೇ ವಿಕಚಸಾರಸಾಳಿಸ್ಖಲತ್ ಪರಾಗಸುರಭೀಕೃತೇ ಪಯಸಿ ಯಸ್ಯ ಯಾತಂ ವಯಃ |
ಸ ಪಲ್ವಲ ಜಲೇಧುನಾ ಮಿಲದನೇಕಭೇಕಾಕುಲೇ ಮರಾಳಕುಲನಾಯಕಃ ಕಥಯ ರೇ ಕಥಂ ವರ್ತತಾಮ್ ||
 
ಜ್ವಲಿಸುವ ಬೆಂಕಿಗೆ ಸೂರ‍್ಯನ ಆಶ್ರಯ ದೊರೆತಾಗ ಅದು ಮತ್ತಷ್ಟು ಪ್ರಜ್ವಲಿಸುತ್ತದೆ. ಹಾಗೆಯೇ ರಾತ್ರಿಯ ಆಶ್ರಯ ಹಿಂದೆ ಹಂಸವು ಮಾನಸಸರೋವರದಲ್ಲಿ ಅನೇಕ ಕಮಲಪುಷ್ಪಗಳಿಂದ ದ್ರವಿಸುವ ಮಕರಂದದಿಂದ ಕೂಡಿದ ಸುಗಂಧಮಯ ನೀರಿನಲ್ಲಿ ತನ್ನ ಆಯುಷ್ಯದ ಎಷ್ಟೋ ದಿನಗಳನ್ನು ಆನಂದದಿಂದ ಕಳೆಯಿತು. ಅದೇ ಹಂಸವು ಈಗ ವಟಗುಟ್ಟುವ ಕಪ್ಪೆಗಳಿಂದ ತುಂಬಿದ, ಮಲಿನ ಜಲಾಶಯದಲ್ಲಿ ಇರಲು ಹೇಗೆ ಸಾಧ್ಯ? ಅದರಂತೆ ಕಾವ್ಯ-ಸಾಹಿತ್ಯರಸಿಕರ ಮಧ್ಯೆ ಕಾಲ ಕಳೆಯುವ ವಿದ್ವಾಂಸನು ಮೂರ್ಖರ ನಡುವೆ ವಾಸಿಸುವುದಾದರೂ ಹೇಗೆ?
 
| ಭಾಮಿನೀವಿಲಾಸ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
| ಮೂಲ ಸಂಗ್ರಹ: ವಿಜಯವಾಣಿ 

Saturday, April 2, 2016

ಅಮೃತವಾಣಿ - ೧೨



ತ್ಯಕ್ತವ್ಯೋ ಮಮಕಾರಃ ತ್ಯಕ್ತುಂ ಯದಿ ಶಕ್ಯತೇ ನಾಸೌ |
ಕರ್ತವ್ಯೋ ಮಮಕಾರಃ ಕಿಂ ತು ಸರ್ವತ್ರ ಕರ್ತವ್ಯಃ ||

ನಾನು-ನನ್ನದು ಎಂಬ ಭಾವನೆಗಳನ್ನು ಬಿಡುವುದು ಸರ್ವೋತ್ತಮವಾದ ಕಾರ್ಯ. ಆದರೆ ಅದನ್ನು ಬಿಡಲು ಸಾಧ್ಯವಾಗದಿದ್ದರೆ ಮಮಕಾರವನ್ನು ಆಚರಿಸೋಣ.ಅಂದರೆ ಎಲ್ಲರ ಬಗ್ಗೆಯೂ ಇವರು ನನ್ನವರು ಎಂದು ಭಾವಿಸೋಣ. ಅವರಿಗೆ ಬಂದ ಕಷ್ಟಗಳನ್ನು ತನ್ನ ಕಷ್ಟಗಳೇ ಎಂದು ತಿಳಿದು ಪರಿಹರಿಸಲು,ಸಾಂತ್ವನ ಹೇಳಲು ಪ್ರಯತ್ನಿಸೋಣ. ಅವರ ಆಧ್ಯಾತ್ಮ ಸಂತೋಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಮ್ಮ ಕಾರ್ಯಕ್ರಮ ಎಂದು ಹೆಮ್ಮೆಯಿಂದ ಅಧಿಕವಾದ ಸಂತೋಷವನ್ನು ಅನುಭವಿಸೋಣ

| ವೈರಾಗ್ಯಶತಕ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ.
| ಮೂಲ ಸಂಗ್ರಹ: ವಿಜಯವಾಣಿ .