Showing posts with label ವಚನ. Show all posts
Showing posts with label ವಚನ. Show all posts

Saturday, April 2, 2016

ಅಮೃತವಾಣಿ - ೧೨



ತ್ಯಕ್ತವ್ಯೋ ಮಮಕಾರಃ ತ್ಯಕ್ತುಂ ಯದಿ ಶಕ್ಯತೇ ನಾಸೌ |
ಕರ್ತವ್ಯೋ ಮಮಕಾರಃ ಕಿಂ ತು ಸರ್ವತ್ರ ಕರ್ತವ್ಯಃ ||

ನಾನು-ನನ್ನದು ಎಂಬ ಭಾವನೆಗಳನ್ನು ಬಿಡುವುದು ಸರ್ವೋತ್ತಮವಾದ ಕಾರ್ಯ. ಆದರೆ ಅದನ್ನು ಬಿಡಲು ಸಾಧ್ಯವಾಗದಿದ್ದರೆ ಮಮಕಾರವನ್ನು ಆಚರಿಸೋಣ.ಅಂದರೆ ಎಲ್ಲರ ಬಗ್ಗೆಯೂ ಇವರು ನನ್ನವರು ಎಂದು ಭಾವಿಸೋಣ. ಅವರಿಗೆ ಬಂದ ಕಷ್ಟಗಳನ್ನು ತನ್ನ ಕಷ್ಟಗಳೇ ಎಂದು ತಿಳಿದು ಪರಿಹರಿಸಲು,ಸಾಂತ್ವನ ಹೇಳಲು ಪ್ರಯತ್ನಿಸೋಣ. ಅವರ ಆಧ್ಯಾತ್ಮ ಸಂತೋಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಮ್ಮ ಕಾರ್ಯಕ್ರಮ ಎಂದು ಹೆಮ್ಮೆಯಿಂದ ಅಧಿಕವಾದ ಸಂತೋಷವನ್ನು ಅನುಭವಿಸೋಣ

| ವೈರಾಗ್ಯಶತಕ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ.
| ಮೂಲ ಸಂಗ್ರಹ: ವಿಜಯವಾಣಿ .

Monday, April 6, 2015

ಭಕ್ತಿಯ ಶಕ್ತಿ ... !!!




ಭಕ್ತಿಯು  ಸೇರಿದರೆ ಅನ್ನಕ್ಕೆ,
ಅನ್ನವು  ಪ್ರಸಾದವು,
ಭಕ್ತಿಯು  ಸೇರಿದರೆ ನೀರಿಗೆ      
ನೀರು ತೀ‍ರ್ಥ / ಚರಣಾಮೃತವು,
ಭಕ್ತಿಯು  ಸೇರಿದರೆ ಹಸಿವಿಗೆ,
ಹಸಿವು ಉಪವಾಸವು,
ಭಕ್ತಿಯು  ಸೇರಿದರೆ ಪ್ರಯಾಣಕ್ಕೆ,
ಪ್ರಯಾಣವು ತೀರ್ಥಯಾತ್ರೆಯು,
ಭಕ್ತಿಯು  ಸೇರಿದರೆ ಸಂಗೀತಕ್ಕೆ,
ಸಂಗೀತವು ಕೀರ್ತನೆಯು,
ಭಕ್ತಿಯು  ಸೇರಿದರೆ ಮನೆಗೆ,
ಮನೆಯು ಮಂತ್ರಾಲಯವು,
ಭಕ್ತಿಯು  ಸೇರಿದರೆ ಕಾಯಕವ,
ಕಾಯಕವು ಸೇವೆಯು,
ಭಕ್ತಿಯು  ಸೇರಿದರೆ ಕೆಲಸಕ್ಕೆ,
ಕೆಲಸವು ಕರ್ಮವು,
ಮತ್ತು
ಭಕ್ತಿಯು  ಸೇರಿದರೆ ಮನುಷ್ಯನ,
ಮನುಷ್ಯನು ಮಾನವನು – ಆಗಿ ಪರಿವರ್ತನೆ ಆಗುವುದು.

ಭಕ್ತಿಯ ಜೊತೆಗೆ  ಜ್ಞಾನ, ನಂಬಿಕೆ ಹಾಗೂ ಧಾರಣೆಗಳಿಂದ ಇವು ತುಂಬ ಸುಲಭವಾಗಿ ಪರಿವರ್ತನೆಯಾಗುವುವು.

~ ಅನಾಮಧೇಯ